June 18, 2026
“Mr. ರಾವ್ & ಅಸೋಸಿಯೇಟ್ಸ್”23 ಜೂನ್ | ಸಂಜೆ 7:30 ಕ್ಕೆ | ರಂಗಶಂಕರ ಜೆಪಿ ನಗರ
ರಂಗಶಂಕರ ದಲ್ಲಿ……..
ಹಾಸ್ಯ, ಕೋಪ, ನೋವು, ವಿಡಂಬನೆ ಮತ್ತು ಸಂಘರ್ಷ ಎಲ್ಲವನ್ನು ಒಳಗೊಂಡ ಪರಿಪೂರ್ಣ ಮಿಶ್ರಣ.
ಮೂರು ವೃದ್ಧರು ಮಾನಸಿಕ ಅಸ್ವಸ್ಥರಾಗಿ ಹುಚ್ಚಸ್ಪತ್ರೆಯಲ್ಲಿರುತ್ತಾರೆ. ಇವರು ನಿಜವಾಗಿಯೂ ಹುಚ್ಚರ? ಅಥವ ಹುಚ್ಚರಂತೆ ನಟಿಸುತ್ತಿದ್ದಾರಾ? ಎಂಬ ಅನುಮಾನ ಆಸ್ಪತ್ರೆಯವರಿಗೆ ಮೂಡುತ್ತದೆ. ಈ ಅನುಮಾನಗಳ ನಂತರ ಕಥೆ ಆಧುನಿಕ ಸಂಸಾರದ ಸಂಘರ್ಷಕ್ಕೆ ಒರಳಿಕೊಳ್ಳುತ್ತದೆ.
‘ತಂದೆ ತಾಯಿ ಅಂದ್ರೆ ಮಕ್ಕಳಿಗೆ ಜವಾಬ್ದಾರಿ ಆಗ್ಬೇಕೆ ವಿನಃ, ಹಣ ಆಸ್ತಿ ಕೊಡೊ ತಿಜೋರಿ ಅನ್ಕೋಬಾರ್ದು’ ಎಂಬ ಕಥಾ ವಸ್ತುವು, ಅಜ್ಜ ಅಜ್ಜಿ ಅಪ್ಪ ಅಮ್ಮ ಮಕ್ಕಳು ಮೊಮ್ಮಕ್ಕಳು ಪ್ರತಿಯೊಬ್ಬರೂ ತಪ್ಪದೆ ನೋಡಲೇಬೇಕಾದ, ನೋಡಿಸಲೇಬೇಕಾದ ಪ್ರಸ್ತುತ ಕಾಲಘಟ್ಟದ ನಾಟಕವೇ.

