ಚಂದ್ರಗಿರಿ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ
ಸ್ನೇಹಾಲಯಂ ಕ್ರಿಯೇಷನ್ಸ್ ಲಾಂಛನದಲ್ಲಿ ಪಂಚಾಕ್ಷರಯ್ಯ ಮರಿಸ್ವಾಮಿ ಅಹಿನಾ ಮನೋಹರ್ ಮತ್ತು ಚಿದಾನಂದಪ್ಪ ರವರು ಜಂಟಿಯಾಗಿ ನಿರ್ಮಿಸುತ್ತಿರುವ
ಚಂದ್ರಗಿರಿ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ.
ಹಿರಿಯ ಕಲಾವಿದರಾದ
ಶೋಭರಾಜ್ ರವರು ಪ್ರದಾನ ಪಾತ್ರದಲ್ಲಿ ನಟಿಸುತ್ತಿರುವ ಚಂದ್ರಗಿರಿ ಸಿನಿಮಾ ಹಾರರ್ ಸಸ್ಪೆನ್ಸ್ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಕಥೆಯಾಗಿದ್ದು.
ತಾರಾಗಣದಲ್ಲಿ
ಶೋಭರಾಜ್ ಉಗ್ರಂ ರವಿ ಪಂಚಾಕ್ಷರಯ್ಯ ಮರಿಸ್ವಾಮಿ ಬೆಂಗಳೂರು ಮನೊ. ಯಶಸ್ ವೀರ ಧನುಷ್.ಮಲ್ಲಿ ವಡ್ಡರಹಟ್ಟಿ ರೂಪಶ್ರೀ ನಂದಿನಿ ಕಮ್ಮಯ್ಯ..ಬಲರಾಮ್ ಪಾಂಚಾಳ್.ವೈಭವೀ ನಾಗರಾಜ್ ಶಶಿರೇಖಾ ಮೊದಲಾದವರು ನಟಿಸಿದ್ದಾರೆ
ಹೊಸಕೋಟೆ ಭಕ್ತರಹಳ್ಳಿ. ವೈಟ್ ಫೀಲ್ಡ್ ಸುತ್ತ ಮುತ್ತ ಮೊದಲನೇ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇದೀಗ ಸಕಲೇಶಪುರದತ್ತ ಹೆಜ್ಜೆ ಹಾಕಿದೆ.
ಗುರುದತ್ ಮುಸುರಿ ಛಾಯಾಗ್ರಹಣ. ವಿನಯ್ ಜಿ ಆಲೂರು ಸಂಕಲನ . ದೇವು ಅಂಬಿಗ ಸಾಹಿತ್ಯ ಸಂಗೀತ. ಸೂರ್ಯ ಕಿರಣ್ ನೃತ್ಯ.ವೈಲೆಂಟ್ ವೇಲು ಸಾಹಸ ಮಲ್ಲಿ ಕೆ ವಡ್ಡರಹಟ್ಟಿ ಸಹ ನಿರ್ದೇಶನ ಇರುವ ಚಂದ್ರಗಿರಿ ಚಿತ್ರಕ್ಕೆ
ರಾಜೀವ್ ಕೃಷ್ಣ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

